ಯಕ್ಷಗಾನ ಮುಖವರ್ಣಿಕಾ ತರಬೇತಿ ಶಿಬಿರ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 19 , 2015
|
ಸೆಪ್ಟೆ೦ಬರ್ 19, 2015
|
ಯಕ್ಷಗಾನ ಮುಖವರ್ಣಿಕಾ ತರಬೇತಿ ಶಿಬಿರ
ಮುಳಿಯಾರು :
ಯಕ್ಷತೂಣೀರ ಸಂಪ್ರತಿಷ್ಥಾನ ( ರಿ ) ಕೋಟೂರು ಇವರ ವತಿಯಿಂದ ಮತ್ತು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಸಭಾಭವನದಲ್ಲಿ 19.09.2015 ಶನಿವಾರದಂದು ಯಕ್ಷಗಾನ ಮುಖವರ್ಣಿಕಾ ತರಬೇತಿ ಶಿಬಿರ ಕಾರ್ಯಕ್ರಮವು ಸಂಪನ್ನಗೊಂಡಿತು. ಪೂರ್ವಾಹ್ನ ಗಂಟೆ 9 ರಿಂದ ಶಿಬಿರಾರ್ಥಿಗಳ ನೋಂದಾವಣೆಯೊಂದಿಗೆ ಶಿಬಿರವು ಆರಂಭವಾಯಿತು.
ಶ್ರೀ ಸತೀಶ ಪುಣಿಂಚಿತ್ತಾಯ ಅವರು ಯಕ್ಷಗಾನ ಪ್ರಾರ್ಥನೆಯನ್ನು ಹಾಡಿದರು . ಶ್ರೀ ರಾಘವೇಂದ್ರ ಉಡುಪುಮೂಲೆ ಅವರು ಮುಖವರ್ಣಿಕೆ ಬರೆಯುತ್ತಾ ಸಮಾರಂಭವನ್ನು ಉದ್ಘಾಟನೆ ಮಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ( ರಿ ) ಪೆರ್ಲ ಇದರ ದಿಗ್ದರ್ಶಕರೂ ಯಕ್ಷಗಾನ ನಾಟ್ಯ ಗುರುಗಳೂ ಆಗಿರುವ ಶ್ರೀ ಸಬ್ಬಣಕೋಡಿ ರಾಮ್ ಭಟ್ ಮತ್ತು ಶ್ರೀ ಮಾಧವ ನೀರ್ಚಾಲು ಅವರು ಸಮಪನ್ಮೂಲ ವ್ಯಕ್ತಿಗಳಾಗಿ ಮುಖವರ್ಣಿಕೆ ಬರೆಯುವ ಶಾಸ್ತೀಯ ವಿಧಾನವನ್ನು ಪ್ರಸ್ತುತಪಡಿಸಿದರು ಮತ್ತು ಶಿಬಿರಾರ್ಥಿಗಳು ಸ್ವಯಂ ಮುಖವರ್ಣಿಕೆಯನ್ನು ಬರೆದುಕೊಳ್ಳಲು ತರಬೇತಿ ನೀಡಿದರು.
ಶ್ರೀ ಪೆರಡಂಜಿ ಗೋಪಾಲಕೃಷ್ಣ ಭಟ್ ಪ್ರಾಸ್ಥಾವಿಕ ಭಾಷಣಮಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಮೇನೇಜರ್ ಶ್ರೀ ಸೀತಾರಾಮ ಬಳ್ಳುಳ್ಳಾಯ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನಿತ್ತು ಶುಭಹಾರೈಸಿದರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕರಾದ ಯಂ. ನ. ಚಂಬಲ್ತಿಮಾರ್ ಅವರು ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು. ಶ್ರೀ ಗೋವಿಂದ ಬಳ್ಳಮೂಲೆ ಅವರು ಪ್ರತಿಷ್ಠಾನದ ವಿವಿಧ ಕಾರ್ಯ ಯೋಜನೆಗಳ ಕುರಿತು ಮಾಹಿತಿಗಳನ್ನಿತ್ತರು. ಶ್ರೀ ಕೃಷ್ಣ ಭಟ್ ಅಡ್ಕ ಧನ್ಯವಾದವಿತ್ತರು.
ಅನುಪಮಾ ರಾಘವೇಂದ್ರ ಉಡುಪುಮೂಲೆ, ರಾಜೇಶ್ವರಿ, ಮುರಳಿಕೃಷ್ಣ ಸ್ಕಂದ, ಸುಬ್ರಹ್ಮಣ್ಯ ಭಟ್ ಅಡ್ಕ, ಈಶ್ವರ ಭಟ್ ಬಳ್ಳಮೂಲೆ, ಡಾ // ಶಿವಕುಮಾರ್ ಅಡ್ಕ, ಉಪಸ್ಥಿತರಿದ್ದರು. ಶಿಬಿರಾರ್ಥಿಗಳ ಸಕ್ರಿಯ ಭಾಗವಹಿಸುವೆಕೆಯಿಂದ ಶಿಬಿರವು ಸಂಪನ್ನವಾಯಿತು.
ಕೃಪೆ : facebook
|
|
|